ಶಿವರಾಜ್ ಕುಮಾರ್ ಗೆ ಕಷ್ಟ ಬಂದರೆ ಯಾರಿಗೆ ಕಾಲ್ ಮಾಡ್ತಾರೆ?

Soma shekhar

ವಯಸ್ಸು ದಾಟಿದ್ದರೂ ಇನ್ನೂ ಯಂಗ್ ಆಂಡ್ ಎನರ್ಜೆಟಿಕ್ ಆಗಿರೋ ನಟ ಎಂದರೆ ಅದು ಶಿವರಾಜ್ ಕುಮಾರ್. ರಾಜ್ ಕುಮಾರ್ ಅವರ ಎರಡನೇ ಮಗ. ಸ್ಯಾಂಡಲ್ ವುಡ್ ನ ಖ್ಯಾಟ ನಟ ಅಷ್ಟೇ ಅಲ್ಲದೇ ಕೋಟ್ಯಾಂತರ ಅಭಿಮಾನಿಗಳ ಪ್ರೀತಿಯ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಒಂದು ವೇಳೆ ಕಷ್ಟ ಬಂದರೆ ಯಾರ ಹತ್ತಿರ ಹೇಳಿಕೊಳ್ಳುತ್ತಾರೆ? ಯಾರಿಗೆ ಕರೆ ಮಾಡುತ್ತಾರೆ ಎನ್ನುವುದಕ್ಕೆ ಉತ್ತರ ಇಲ್ಲಿದೆ ನೋಡಿ.

 

ಶಿವರಾಜ್ ಕುಮಾರ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಕೇವಲ ರಾಜ್ ಫ್ಯಾಮಿಲಿ ಎಂದಲ್ಲ, ಬದಲಾಗಿ ಶಿವಣ್ಣ ಸಂಪಾದಿಸಿದ ಆ ಪ್ರೀತಿಯಿಂದ. ಇನ್ನೂ ಹೀರೋ ಆಗಿ ಮಿಂಚುತ್ತಿರುವ ಶಿವರಾಜ್ ಕುಮಾರ್ ಅವರನ್ನು ಒಮ್ಮೆ ನೋಡಿದರೆ ಅವರ ವಯಸ್ಸು 50 ದಾಟಿದೆ ಎನ್ನಿಸುವುದೇ ಇಲ್ಲ. ಇರಲಿ, ಕಷ್ಟಗಳು ಎಲ್ಲರಿಗೂ ಬರುತ್ತವೆ.ಅದು ಸಹಜ, ಅದರೆ ಕಷ್ಟಗಳು ಬಂದಾಗ ನಾವು ಅದನ್ನು ಹೇಗೆ ಎದುರಿಸುತ್ತೇವೆ ಎನ್ನುವುದು ಮುಖ್ಯ. 

 

ಕಷ್ಟಗಳು ಬಂದಾಗ ನಾವು ನಮ್ಮ ಪ್ರೀತಿ ಪಾತ್ರರ ಹತ್ತಿರ ಅದರ ಬಗ್ಗೆ ಮಾತನಾಡುತ್ತೇವೆ. ಅದರ ಪರಿಹಾರಕ್ಕೆ ಯೋಚಿಸುತ್ತೇವೆ. ಹೌದಲ್ಲವೇ? ಹೀಗೆ ಒಂದುವೇಳೆ ನಟ ಶಿವರಾಜ್ ಕುಮಾರ್ ಅವರಿಗೆ ಕಷ್ಟ ಬಂದರೆ ಏನು ಮಾಡುತ್ತಾರೆ?  ಅವರು ಮೊದಲು ಕರೆ ಮಾಡುವುದೇ ತಮ್ಮ ಬಾಲ್ಯದ ಕುಚುಕು ಗುರುದತ್ ಅವರಿಗೆ. ಹೌದು ಶಿವರಾಜ್ ಕುಮಾರ್ ಅವರು ಮೊದಲು ಗುರುದತ್ ಅವರಿಗೆ ಕರೆ ಮಾಡಿ ಮಾತನಾಡುತ್ತೇನೆ ಎಂದು ಇತ್ತೀಚಿನ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

 

ದಶಕಗಳು ಕಳೆದರೂ ಗುರುದತ್ ಅವರ ಗೆಳೆತನ ಇನ್ನೂ ಮಾಸಿಲ್ಲ. ಇದು ಸಿನಿಮಾ ಮಂದಿಗೆ ಚೆನ್ನಾಗಿ ಗೊತ್ತು. ಗುರುದತ್ ಅವರು ಬೇರೆ ಯಾರೂ ಅಲ್ಲ, ಚಿ.ಉದಯ ಶಂಕರ್ ಅವರ ಪುತ್ರ. ಹೌದು ಇವರಿಬ್ಬರ ಗೆಳೆತನ ಕೂಡ ಬಾಲ್ಯದಿಂದ ಇವತ್ತಿಗೂ ಇನ್ನೂ ಗಟ್ಟಿಯಾಗುತ್ತಲೇ ಬಂದಿದೆ. ಹೀಗಾಗಿ ಶಿವರಾಜ್ ಕುಮಾರ್ ಅವರು ಗುರುದತ್ ಅವರಿಗೆ ಕರೆ ಮಾಡಿ ತಮ್ಮ ಸಮಸ್ಯೆ ಹಂಚಿಕೊಳ್ಳುತ್ತಾರೆ. 

 


ಇನ್ನು ಮತ್ಯಾರಿಗೆ ಶಿವಣ್ಣ ಕರೆ ಮಾಡುತ್ತಾರೆ ಎಂದರೆ, ಅದುವೇ ಮಧು ಬಂಗಾರಪ್ಪ ಮತ್ತು ಶ್ರೀಕಾಂತ್. ಮಧು ಬಂಗಾರಪ್ಪ ಅವರು ಶಿವಣ್ಣ ಅವರ ಸಂಬಂಧಿ. ಇನ್ನು ಶ್ರೀಕಾಂತ್ ಅಂದರೆ ಅದು ಗರು ನಿರ್ಮಾಪಕ ಕೆ.ಪಿ.ಶ್ರೀಕಾಂತ್. ಹೌದು ಈ ಇಬ್ಬರಿಗೂ ಕೂಡ ಶಿವಣ್ಣ ಕರೆ ಮಾಡಿ ಮಾತನಾಡುತ್ತಾರೆ. 
 

Find Out More:

Related Articles: