ಕೀನ್ಯಾದ ಅರಣ್ಯದಲ್ಲಿ ದರ್ಶನ್ ವೈಲ್ಡ್ ಲೈಫ್ ಫೋಟೋಗ್ರಫಿ

somashekhar
  
ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ಡಿ ಬಾಸ್ ದರ್ಶನ್ ಸದ್ಯ ಕೀನ್ಯಾದಲ್ಲಿ ಬೀಡು ಬಿಟ್ಟಿದ್ದಾರೆ. ಪ್ರಸ್ತುತ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ  ಡಿ ಬಾಸ್ ಕೀನ್ಯಾಗೆ ತೆರಳಿ ಫೋಟೋಗ್ರಫಿಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.  ಅರೇ ಏನಪ್ಪಾ ಇದು, ಡಿ ಬಾಸ್ ಖ್ಯಾತಿಯ ದರ್ಶನ್ ಯಾಕೆ ಶೂಟಿಂಗ್ ಬಿಟ್ಟು ಪ್ರೋಟೋಗ್ರಫಿ ಯಾಕೆ ಮಾಡ್ತಿದ್ದಾರೆ ಅಂತ ಗೊಂದಲವಾಯ್ತಾ. ಯಾಕೆ ಅಂತ ನಾವ್ ಹೇಳ್ತೀವಿ ಕೇಳಿ.  ಹೌದು, ದರ್ಶನ್ ಗೆ ವೈಲ್ಡ್ ಲೈಫ್ ಫೋಟೋಗ್ರಫಿ ಅಂದ್ರೆ ತುಂಬ ಇಷ್ಟ. ಆಗಾಗ ಬಿಡುವಿದ್ದಾಗ ಕ್ಯಾಮರಾ ಹಿಡಿದು ಪ್ರಾಣಿಗಳನ್ನು ಸೆರೆಹಿಡಿಯುತ್ತಿರುತ್ತಾರೆ ದರ್ಶನ್. 

ಆದ್ದರಿಂದ ಪ್ರಸ್ತುತ ಕೀನ್ಯಾದ ಮಾಸಾಯ್ ಮಾರಾ ಎಂಬ ರಾಷ್ಟ್ರೀಯ ಉದ್ಯಾನವನಕ್ಕೆ ದರ್ಶನ್ ಭೇಟಿ ನೀಡಿ ಅಲ್ಲಿನ ಪ್ರಾಣಿಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದಾರೆ. ದರ್ಶನ್ ಫೋಟೋಗ್ರಫಿ ಮಾಡುತ್ತಿರುವ ವಿಡಿಯೋ ಹಾಗೂ ಪೋಟೋಗಳು  ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿದೆ. ಸ್ನೇಹಿತರ ಜೊತೆ ತೆರಳಿರುವ ದರ್ಶನ್ ಫೋಟೋ ಕ್ಲಿಕ್ಕಿಸುವ ಜೊತೆಗೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ದರ್ಶನ್-ಯಶ್ ಸ್ಫೂರ್ತಿಯಿಂದ ಅಭಿಮಾನಿಗಳಲ್ಲಿ ಮನವಿ ಮಾಡಿದ ಅಭಿಷೇಕ್ ಅಂಬರೀಶ್:

ದರ್ಶನ್ ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದಾರೆ. ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ದರ್ಶನ್ ಪ್ರಾಣಿಗಳ ಫೋಟೋಗಳನ್ನು ಸೆರೆಹಿಡಿದು ಅದನ್ನು ಮಾರಾಟ ಮಾಡಿ ಬಂದ ಹಣವನ್ನು ಅರಣ್ಯ ಇಲಾಖೆಗೆ ನೀಡಿದ್ದರು. ಆದ್ರೆ ಈ ಬಾರಿ ಕೀನ್ಯಾದಲ್ಲಿ ಸೆರೆಹಿಡಿದ ಫೋಟೋಗಳನ್ನು ಮಾರಟಕ್ಕಿಟ್ಟು ಹಣವನ್ನು ಅರಣ್ಯ ಇಲಾಖೆಕೆಗೆ ನೀಡುವ ಯೋಚನೆ ಇದಿಯೋ ಗೊತ್ತಿಲ್ಲ. ಆದ್ರೆ ದೂರದ ಕೀನ್ಯಾದಲ್ಲಿ ಫೋಟೋಗ್ರಫಿ ಮಾಡುತ್ತಾ ಗೆಳಯರೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ.
ದರ್ಶನ್ ಮುಂದಿನ ಚಿತ್ರ ರಾಬರ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮಾಡಿರುವ ಚಿತ್ರತಂಡ ಈಗ ಕೊಂಚ ಬ್ರೇಕ್ ನೀಡಿದೆ. ಇನ್ನು ದರ್ಶನ್ ಅಭಿನಯದ ಒಡೆಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದಾದ ಬಳಿಕ ಗಂಡುಗಲಿ ಮದಕರಿ ನಾಯಕ ಸಿನಿಮಾ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ.


Find Out More:

Related Articles: