ಗ್ರಾಮ ವಾಸ್ತವ್ಯದ ಮೂಲಕ‌ ಸಿಎಂ‌ ಪಿತೂರಿ

somashekhar

ರಾಜ್ಯದಲ್ಲಿ ಜನರು ಮೈತ್ರಿ ಸರ್ಕಾರ ತಿರಸ್ಕಾರ ಮಾಡಿದ್ದು, ಸರ್ಕಾರ ವಿಶ್ವಾಸ ಕಳೆದುಕೊಂಡಿದೆ. ಹೀಗಾಗಿ ಮುಖ್ಯಮಂತ್ರಿ ಅವರು ಅಪ್ಪನ ಮಾತು ಕೇಳಿ ರಾಜಕೀಯ ದೊಂಬರಾಟ ಮಾಡೋಕೆ ಹಾಗೂ ಜನರ ಗಮನ ಬೇರೆಡೆ ಸೆಳೆಯೋಕೆ ಗ್ರಾಮ ವಾಸ್ತವ್ಯದ ಪಿತೂರಿ ನಡೆಸಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. 

 

ಶನಿವಾರ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಿ.ಎಸ್‌ ಯಡಿಯೂರಪ್ಪ ಅವರು, ಈಗ ಮುಖ್ಯಮಂತ್ರಿ ಆಗಿರೋ ಕುಮಾರಸ್ವಾಮಿ ಕಳೆದ ಬಾರಿ 42 ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಅಲ್ಲಿನ ಪ್ರಗತಿ ಸಾಧಿಸಿ ಒಂದು ಪುಸ್ತಕ ಹೊರತರಲಿದ್ದೇವೆ ಎಂದು ಹೇಳಿದರು. 

 

ಶಿವಮೊಗ್ಗದಲ್ಲಿ ಬೀಕರ ಬರಗಾಲ, ಕುಡಿಯುವ ನೀರಿನ‌ ಸಮಸ್ಯೆ ಇದೆ. ಈ ಕುರಿತು ಸತ್ಯಾಗ್ರಹ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಬರಗಾಲ ಪೀಡಿತ ಪ್ರದೇಶಕ್ಕೆ ಹೋಗಿ ಸ್ಥಳದಲ್ಲೇ ಪರಿಹಾರ ಹುಡುಕುವುದನ್ನು ಬಿಟ್ಟು, ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಬಿಎಸ್ವೈ ಕಿಡಿ ಕಾರಿದರು.

 

Find Out More:

Related Articles: