ಪ್ಯಾಂಟಮ್ ಗಾಗಿ ಬೃಹತ್ ಕಾಡನ್ನು ನಿರ್ಮಿಸುತ್ತಿದ್ದಾರೆ ನಿರ್ದೇಶಕ ಅನೂಪ್ ಬಂಡಾರಿ : ಅದು ಎಲ್ಲಿ ಗೊತ್ತಾ..?

Soma shekhar

ಕೊರೋನಾ ಅಟ್ಟಹಾಸದಿಂದ ದೇಶದ ಎಲ್ಲಾ ಉದ್ಯಮಗಳೂ ನಷ್ಟವನ್ನು ಅನುಭವಿಸುತ್ತಿದೆ. ಹೊರತಾಗಿ ಚಿತ್ರರಂಗಗಳಿಲ್ಲ ಇಂದಿನ ಕೊರೋನಾ ಕಾಲದಲ್ಲಿ ಚಿತ್ರರಂಗದಲ್ಲಿ ಯಾವೊಂದು ಚಿತ್ರೀಕರಣಗಳು ನಡೆಯುತ್ತಿಲ್ಲ. ಆದರೆ ಕಿಚ್ಚ ಸುದೀಪ್ ಅಭಿನಯದ ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಪ್ಯಾಂಟಮ್ ಚಿತ್ರದ ಚಿತ್ರೀಕರಣ ಮಾತ್ರ ಅದ್ದೂರಿಯಾಗಿ ನಡೆಯುತ್ತಿದೆ.

 

ಹೌದು ಫ್ಯಾಂಟಮ್. ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್​ ಭಂಡಾರಿ ಸಾರಥ್ಯದ ಸಸ್ಪೆನ್ಸ್​ ಥ್ರಿಲ್ಲರ್​. ಟೈಟಲ್​ನಿಂದ್ಲೇ ಒಂದು ರೇಂಜ್​ಗೆ ಕುತೂಹಲ ಕೆರಳಿಸಿರೋ ಈ ಚಿತ್ರದಲ್ಲಿ ಸುದೀಪ್​​​ ಕೀ ರೋಲ್​ ಪ್ಲೇ ಮಾಡ್ತಿದ್ದಾರೆ. ದೇವನಹಳ್ಳಿ ಬಳಿ ಸೆಟ್​ ಹಾಕಿ ಫಸ್ಟ್​ ಶೆಡ್ಯೂಲ್​ ಶೂಟಿಂಗ್ ಕಂಪ್ಲೀಟ್​ ಮಾಡಿದ್ದ ಚಿತ್ರತಂಡ ಸೆಕೆಂಡ್​ ಶೆಡ್ಯೂಲ್​ಗೆ ಪ್ಲಾನ್​ ಮಾಡ್ತಿದೆ. ಕೊರೊನಾ ಹಾವಳಿಯಿಂದ ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿದೆ. ಆದರೆ, ಕೊರೊನಾಗೆ ಜಗ್ಗದೇ ಫ್ಯಾಂಟಮ್​ ಶೂಟಿಂಗ್​ಗೆ ಮಾಸ್ಟರ್​ ಪ್ಲಾನ್​ ಶುರುವಾಗಿದೆ.

 

ಕೊರೊನಾ ಮಿಂಚಿನ ವೇಗದಲ್ಲಿ ಹರಡುತ್ತಿರುವ ಸಮಯದಲ್ಲಿ ಸಿನಿಮಾ ಶೂಟಿಂಗ್​ ಶುರು ಮಾಡಿಕೊಂಡಿರುವ ಫ್ಯಾಂಟಮ್​ ಟೀಂ 150 ಜನ ಕಾರ್ಮಿಕರನ್ನ ಬಳಸಿಕೊಂಡು ಹೈದ್ರಾಬಾದ್​ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್​ಗಳನ್ನ​ ನಿರ್ಮಾಣ ಮಾಡ್ತಿದೆ. ಕೆಜಿಎಫ್​ ಖ್ಯಾತಿಯ ಆರ್ಟ್​ ಡೈರೆಕ್ಟರ್​ ಶಿವಕುಮಾರ್​ ಫ್ಯಾಂಟಮ್​​​ ಚಿತ್ರಕ್ಕೆ ಹೊಸ ಲೋಕವನ್ನೇ ಸೃಷ್ಟಿಸುತ್ತಿದ್ದಾರೆ.

 

ಥ್ರಿಲ್ಲರ್​ ಫ್ಯಾಂಟಮ್​ ಚಿತ್ರಕ್ಕಾಗಿ ಕಾಡಿನಲ್ಲಿ ಶೂಟಿಂಗ್​ ನಡೆಸಬೇಕಿತ್ತು. ಆದರೆ, ಒಂದಷ್ಟು ಭಾಗವನ್ನ ಸೆಟ್​ ಹಾಕಿ ಶೂಟ್​ ಮಾಡಲು ಚಿತ್ರತಂಡ ಪ್ಲಾನ್​ ಮಾಡಿತ್ತು. ಅದಕ್ಕಾಗಿ ಹೈದ್ರಬಾದ್​ನಲ್ಲಿರೋ ಅನ್ನಪೂರ್ಣ ಸ್ಟುಡಿಯೋದಲ್ಲಿ ಸೆಟ್​ ಹಾಕುವ ಕೆಲಸ ಶುರುವಾಗಿತ್ತು. ರಾಜಮಂಡ್ರಿಯಿಂದ ಲಾರಿಗಳಲ್ಲಿ ಲಕ್ಷ ಲಕ್ಷ ಗಿಡ-ಮರಗಳನ್ನ ತರಲಾಗಿತ್ತು. ಅಷ್ಟರಲ್ಲಿ ಕೊರೊನಾ ಅಟ್ಟಹಾಸ ಶುರುವಾಗಿ ಲಾಕ್​ಡೌನ್​ ಜಾರಿಯಾಯ್ತು. ಇದೀಗ ತೆಲಂಗಾಣದಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ್ದು, ಫ್ಯಾಂಟಮ್​ ಚಿತ್ರಕ್ಕಾಗಿ ಕಾಡಿನ ಸೆಟ್​ ಹಾಕುವ ಕೆಲಸ ನಡೀತಿದೆ.

 

ಶಾಲಿನಿ ಆರ್ಟ್ಸ್​​ ಬ್ಯಾನರ್​ನಲ್ಲಿ ನಿರ್ಮಾಪಕ ಜಾಕ್​ ಮಂಜು ಫ್ಯಾಂಟಮ್​ ಸಿನಿಮಾವನ್ನ ನಿರ್ಮಾಣ ಮಾಡ್ತಿದ್ದಾರೆ. ಕ್ವಾಲಿಟಿ ವಿಚಾರದಲ್ಲಿ ರಾಜಿಯಾಗದೇ ಬಹಳ ಅದ್ಧೂರಿಯಾಗಿ ಚಿತ್ರವಬ್ನ ತೆರೆಗೆತರುವ ಪ್ರಯತ್ನ ಮಾಡ್ತಿದ್ದಾರೆ. ಸೆಟ್‍ನಲ್ಲಿ ವೈದ್ಯಕೀಯ ತಂಡವನ್ನು ನಿಯೋಜಿಸಿ, ಸಿನಿಕಾರ್ಮಿಕರ ಬಗ್ಗೆ ಕಾಳಜಿ ವಹಿಸಲಾಗಿದೆ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸೆಟ್​ ನಿರ್ಮಾಣದ ಕೆಲಸ ನಡೀತಿದೆ. ದೊಡ್ಡ ಕಾಡು, ಕಾಡಿನಲ್ಲಿ ಸುಂದರ ಜಲಪಾತ, ಮುರಿದ ಸೇತುವೆ ಹೀಗೆ ವಿಭಿನ್ನವಾಗಿ ಸೆಟ್​​ ನಿರ್ಮಾಣ ಮಾಡಲಾಗ್ತಿದೆ.

 

ಇನ್ನೊಂದು ವಾರದಲ್ಲಿ ಫ್ಯಾಂಟಮ್​ ಚಿತ್ರದ ಸೆಟ್​​ ಸಂಪೂರ್ಣವಾಗಿ ನಿರ್ಮಾಣವಾಗಲಿದೆ. ಶೀಘ್ರದಲ್ಲೇ ಸುದೀಪ್​ ಅಂಡ್​ ಟೀಂ ಶೂಟಿಂಗ್​ಗಾಗಿ ಹೈದರಾಬಾದ್​ಗೆ ತೆರಳಲಿದೆ. ಸೆಟ್​ನಲ್ಲಿ ಹಗಲು ರಾತ್ರಿ ಚಿತ್ರದ ಕ್ರೂಷಿಯಲ್ ಸೀಕ್ವೆನ್ಸ್​ನ ಶೂಟ್​ ಮಾಡುವ ಪ್ಲಾನ್​ನಲ್ಲಿದ್ದಾರೆ ಅನೂಪ್ ಭಂಡಾರಿ. ಕಾಡಿನ ಸೆಟ್​​ನಲ್ಲಿ ನೈಟ್​ ಎಫೆಕ್ಟ್​​ನಲ್ಲೂ ಶೂಟಿಂಗ್​ ನಡೆಸೋ ಲೆಕ್ಕಚಾರವಿದೆ. ಖಡಕ್​ ಟೈಟಲ್, ಕಿಚ್ಚನ ವಿಕ್ರಾಂತ್​ ರೋಣ ಕ್ಯಾರೆಕ್ಟರ್​ ಮತ್ತು ಲುಕ್ಕಿನಿಂದ ಫ್ಯಾಂಟಮ್​ ಸಿನಿಮಾ ಸೆನ್ಸೇಷನ್​ ಕ್ರಿಯೇಟ್​ ಮಾಡಿದೆ.

 

ಕೊರೊನಾ ಸಮಸ್ಯೆ ಶುರುವಾದ ನಂತ್ರ ಶೂಟಿಂಗ್​ ಪ್ರಾರಂಭಿಸ್ತಿರೋ ಮೊದಲ ಕನ್ನಡ ಸಿನಿಮಾ ಫ್ಯಾಂಟಮ್​. ಚಿತ್ರದಲ್ಲಿ ನಿರೂಪ್​ ಭಂಡಾರಿ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಲಾಕ್​ಡೌನ್​ ಟೈಮಲ್ಲಿ ಸುದೀಪ್​ ಮನೆಯಲ್ಲೇ ವರ್ಕ್​ಔಟ್​ ಮಾಡಿ ವಿಕ್ರಾಂತ್​ ರೋಣ ಪಾತ್ರಕ್ಕಾಗಿ ದೇಹ ಹುರಿಗೊಳಿಸಿಕೊಂಡಿದ್ದಾರೆ. ಅಭಿಮಾನಿಗಳಂತೂ ವಿಕ್ರಾಂತ್​ ರೋಣ ಆರ್ಭಟ ನೋಡೋಕ್ಕೆ ಕಾಯ್ತಿದ್ದಾರೆ. ಶೀಘ್ರದಲ್ಲೇ ಫ್ಯಾಂಟಮ್ ಪ್ರಪಂಚಕ್ಕೆ ಕಿಚ್ಚನ ಎಂಟ್ರಿಯಾಗಲಿದೆ.

Find Out More:

Related Articles: