ಭಾರತದ ವಿರುದ್ಧದ ಗೆಲುವಿನ ಗುಟ್ಟು ಬಿಚ್ಚಿಟ್ಟ ಕಿವೀಸ್‌ ನಾಯಕ!? ಏನದು ಗೊತ್ತಾ!?

Soma shekhar
ಹ್ಯಾಮಿಲ್ಟನ್‌: ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಹಣಾಹಣಿಯಲ್ಲಿ ಬಲಿಷ್ಠ ಟೀಮ್‌ ಇಂಡಿಯಾ ವಿರುದ್ಧ ನಾಲ್ಕು ವಿಕೆಟ್‌ ಜಯ ದಾಖಲಿಸಲು ಕಾರಣವೇನು ಗೊತ್ತಾ!? ಅಷ್ಟಕ್ಕೂ ಕಿವೀಸ್ ಮಾಡಿದ ಮಾಸ್ಟರ್ ಪ್ಲಾನ್ ಆದರೂ ಏನೂ! ಕಿವೀಸ್ ಗೆಲುವಿನ ಸಿಕ್ರೇಟ್  ಇಲ್ಲಿದೆ ನೋಡಿ. 
 
ಟಿ20 ಸರಣಿಯಲ್ಲಿ ವೈಟ್ ವಾಶ್ ಅನುಭವಿಸಿದ್ದ ಕಿವೀಸ್ ಇದೀಗ ಬಲಿಷ್ಠ ಟೀಂ ಇಂಡಿಯಾವನ್ನು 2 ಪಂದ್ಯಗಳಲ್ಲಿ ಸೋಲಿಸಲು ನಮ್ಮ ಜೊತೆಯಾಟಗಳೇ ಕಾರಣ ಎಂದು ನ್ಯೂಜಿಲೆಂಡ್‌ ತಂಡದ ಹಂಗಾಮಿ ನಾಯಕ ಟಾಮ್‌ ಲೇಥಮ್‌ ಹೇಳಿದ್ದಾರೆ. ಹೌದು, ಟಿ20 ಸರಣಿಯಲ್ಲಿ ಭಾರತಕ್ಕೆ ಸೋಲುಣಿಸಲು ಎರಡು ಬಾರಿ ಹತ್ತಿರ ತಲುಪಿದ್ದ ಕಿವೀಸ್‌, ಸೂಪರ್‌ ಓವರ್‌ನಲ್ಲಿ ತಡವರಿಸಿ ನಿರಾಸೆ ಅನುಭವಿಸಿತ್ತು.
 
ಆದರೆ, ಸೆಡಾನ್‌ ಪಾರ್ಕ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಿ ಸತತ ಐದು ಸೋಲಿನ ಬಳಿಕ ಮೊದಲ ಗೆಲುವಿನ ಸಿಹಿಯುಂಡಿದೆ. ಪಂದ್ಯದಲ್ಲಿ 348 ರನ್‌ಗಳ ಬೃಹತ್‌ ಮೊತ್ತವನ್ನು ಯಶಸ್ವಿಯಾಗಿ ಮೆಟ್ಟಿನಿಂತ ನ್ಯೂಜಿಲೆಂಡ್‌ ತಂಡದ ಪರ ರಾಸ್‌ ಟೇಲರ್‌ (109*), ಹೆನ್ರಿ ನಿಕೋಲ್ಸ್‌ (78) ಮತ್ತು ಹಂಗಾಮಿ ನಾಯಕ ಟಾಮ್‌ ಲೇಥಮ್‌ (69) ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ಗೆಲುವಿನ ರೂವಾರಿಗಳೆನಿಸಿದರು. 
 
ಆಟಗಾರರಿಂದ ಮೂಡಿಬಂದ ಅದ್ಭುತ ಪ್ರದರ್ಶನವಿದು. ಇನಿಂಗ್ಸ್‌ ಅಂತ್ಯದಲ್ಲಿ ಒತ್ತಡ ನಿಭಾಯಿಸಿ ಗೆಲುವಿನ ದಡ ಮುಟ್ಟಿರುವುದು ಸಂತಸ ನೀಡಿದೆ. ಪಂದ್ಯಗೆಲ್ಲಲು ನಮಗೆ ಉತ್ತಮ ಜೊತೆಯಾಟಗಳನ್ನು ಕಟ್ಟುವ ಅಗತ್ಯವಿತ್ತು. ಏಕೆಂದರೆ ನಾವು ಅಂದುಕೊಂಡದ್ದಕ್ಕಿಂತಲೂ ಅಧಿಕ ಮೊತ್ತವನ್ನು ಬೆನ್ನತ್ತುವಂತಾಗಿತ್ತು. ಸಿಕ್ಕಂತ ಉತ್ತಮ ಆರಂಭದ ಬಳಿಕ ವಿಕೆಟ್‌ಗಳನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಗೆಲುವಿಗೆ ನೆರವಾಯಿತು," ಎಂದಿದ್ದಾರೆ. 
 
"ಎರಡಗೈ ಮತ್ತು ಬಲಗೈ ಬ್ಯಾಟ್ಸ್‌ ಮನ್‌ ಕ್ರೀಸ್‌ನಲ್ಲಿ ಇರುವ ಸಂದರ್ಭದಲ್ಲಿರನ್‌ ಕಾಯ್ದುಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ಗಮನಿಸಿದ್ದೇವೆ. ಸರಣಿಯಲ್ಲಿ ಗೆಲುವಿನ ಆರಂಭ ಸಿಕ್ಕಿರುವುದು ವಿಶ್ವಾಸ ಹೆಚ್ಚಿಸಿದೆ. ರಾಸ್‌ ಶ್ರೇಷ್ಠ ಆಟವಾಡಿದರು.ಈಡನ್‌ ಪಾರ್ಕ್‌ನಲ್ಲಿ ಪರ್ಫೆಕ್ಟ್‌ ಆಟವಾಡುವ ಆಶಯ ಹೊಂದಿದ್ದೇವೆ," ಎಂದು ಲೇಥಮ್‌ ಎಚ್ಚರಿಕೆ ರವಾನಿಸಿದ್ದಾರೆ. ಎರಡೂ ತಂಡಗಳು ಇದೀಗ ಆಕ್ಲೆಂಡ್‌ನ ಈಡನ್‌ ಪಾರ್ಕ್‌ನಲ್ಲಿ ನಡೆಯಲಿರುವ 2ನೇಏಕದಿನ ಪಂದ್ಯದಲ್ಲಿ ಶನಿವಾರ ಮುಖಾಮುಖಿಯಾಗಲಿವೆ.

Find Out More:

Related Articles: