ದರ್ಶನ್ ಹೆಂಡತಿ ಟ್ವೀಟ್ ರಹಸ್ಯವೇನು?

somashekhar
ನಟ ದರ್ಶನ್ ಅವರಿಗೆ ಹೇಗೆ ಅಭಿಮಾನಿಗಳು ಇದ್ದಾರೋ ಹಾಗೆಯೇ ಶತ್ರುಗಳೂ ಇದ್ದಾರೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಹೌದು ಸಿನಿಮಾ ಇಂಡಸ್ಟ್ರೀ ಅಂದ್ರೆನೇ ಹಾಗೆ ಅಲ್ಲದೇ, ಅಲ್ಲಿ ಕಾಲೆಳೆಯುವವರು, ತೊಂದರೆ ಕೊಡುವವರು ಅಪಪ್ರಚಾರ ಮಾಡುವವರು ಇದ್ದೇ ಇರುತ್ತಾರೆ.. ಆದರೆ ದರ್ಶನ್ ಕೂಡ ಕೆಲವೊಂದು ವಿಚಾರಗಳಲ್ಲಿ ತಪ್ಪು ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ ಹೀಗಾಗಿ ಟೀಕೆಗೆ ಒಳಗಾಗುತ್ತಿದ್ದಾರೆ.


ಮೊನ್ನೆ ಮೊನ್ನೆಯಷ್ಟೇ ದರ್ಶನ್ ಅವರ ಬಗ್ಗೆ ರವಿ ಬೆಳಗೆರೆ ಅವರು ಮಾತನಾಡಿದ್ದರು. ದರ್ಶನ್ ಅವರು ತಮ್ಮ ಹೆಂಡತಿಗೆ ಹೊಡೆದ ವಿಚಾರವನ್ನು ಎತ್ತಿಕೊಂಡು ಹಿಗ್ಗಾ ಮುಗ್ಗಾ ಜಾಡಿಸಿದ್ದರು. ಆಗ ದರ್ಶನ್ ಅಭಿಮಾನಿಗಳೂ ಕೂಡ ರವಿ ಬೆಳೆಗೆರೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗೆ ಇದೆಲ್ಲ ತಣ್ಣಗಾಗುವಾಗಲೇ ಮತ್ತೊಮ್ಮೆ ದರ್ಶನ್ ಸದ್ದು ಮಾಡಿದ್ದಾರೆ. ಅದೂ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬಿಡುಗಡೆ ಆದಾಗ ದರ್ಶನ್ ಅಭಿಮಾನಿಗಳು ಪೈಲ್ವಾನ್ ಚೆನ್ನಾಗಿಲ್ಲ ಎಂದು ಅಪಪ್ರಚಾರ ಮಾಡಿದ್ದಾರೆ.


ಆದರೆ ಇದೀಗ ವಿಷಯ ಏನಪ್ಪ ಅಂದರೆ, ದರ್ಶನ್ ಅವರ ಹೆಂಡತಿ ಅಂದರೆ ವಿಜಯಲಕ್ಷ್ಮಿ ಒಂದು ಟ್ವೀಟ್ ಹಾಕಿದ್ದಾರೆ. ಅವರು ಹಾಕಿರುವ ಈ ಟ್ವೀಟ್ ಹಿಂದೆ ಅರ್ಥ ಏನಿರಬಹುದು ಎನ್ನುವ ಚರ್ಚೆ ಶುರುವಾಗಿದೆ. ಹಾಗಾದರೆ ಆ ಟ್ವೀಟ್ ಏನು ಗೊತ್ತಾ? "ಕರ್ಮ, ಪ್ರತೀಕಾರದ ಅವಶ್ಯಕತೆಯೇ ಇಲ್ಲ, ಸುಮ್ಮನೆ ಕುಳಿತು ಕಾದು ನೋಡುತ್ತಿದ್ದರೆ ಸಾಕು. ನಿನ್ನನ್ನು ನೋಯಿಸಿದವರು ಕ್ರಮೇಣ ತಮ್ಮನ್ನು ತಾವೇ ನಾಶ ಮಾಡಿಕೊಳುತ್ತಾರೆ. ನೀವು ಅದೃಷ್ಟವಂತರಾಗಿದ್ದರೆ, ಅದನ್ನೆಲ್ಲ ನೋಡುವ ಅವಕಾಶವನ್ನೂ ದೇವರು ನಿಮಗೆ ನೀಡುತ್ತಾನೆ," ಹೀಗೆ ವಿಜಯಲಕ್ಷ್ಮೀ ಟ್ವೀಟ್ ಮಾಡಿದ್ದಾರೆ.


ಈ ಟ್ವೀಟ್ ನೇರವಾಗಿ ಯಾರಿಗೆ ಮಾಡಿದ್ದಾರೆ ಎನ್ನುವ ಅಂಶ ಇಲ್ಲದೇ ಇದ್ದರೂ ಇದನ್ನು ಯಾರೋ ಒಬ್ಬರಿಗೆ ಹೇಳಲು ಮತ್ಯಾರಿಗೂ ಟಾಂಗ್ ಕೊಡೋಕೆ ಅವರು ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಈ ಟ್ವೀಟ್ ಇದೀಗ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಜಯಲಕ್ಷ್ಮೀ ಮತ್ತು ದರ್ಶನ್ ಸಾಂಸಾರಿಕ ಜೀವನದಲ್ಲಿ ಬಿರುಕು ಬಿಟ್ಟಿದ್ದ ಸುದ್ದಿಗಳನ್ನು ಈ ಹಿಂದೆಯೇ ಬಂದಿದ್ದವು. ಅಲ್ಲದೇ ವಿಜಯಲಕ್ಷ್ಮಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ಸಲ್ಲಿಸಿದ್ದರು. ಆಮೇಲೆ ಆ ಪ್ರಕರಣ ಸುಖಾಂತ್ಯ ಕಂಡಿತ್ತು. ಇದೀಗ ಮತ್ತೆ ಅದೇನಾಗುತ್ತಿದೆಯೋ ದೇವರಿಗೆ ಗೊತ್ತು.


Find Out More:

Related Articles: