ರಶ್ಮಿಕಾ ವಿರುದ್ಧ ಕನ್ನಡಪರ ಸಂಘಟನೆ ಪ್ರತಿಭಟನೆ

somashekhar
ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್ ಕಾಮ್ರೆಡ್ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟದ ಒತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೇನಕಾ ಚಿತ್ರಮಂದಿರದ ಬಳಿ ಚಿತ್ರದ ಪ್ರದರ್ಶನ ನಿಲ್ಲಿಸಿ ಎಂದು ಪ್ರತಿಭಟನೆ ಮಾಡಿದ್ದಾರೆ.


ಕನ್ನಡದ ಹೋರಾಟಗಾರ ನಾಗೇಶ್ ಕುಮಾರ್ ಅವರ ನೇತೃತ್ವದಲ್ಲಿ ಮೇನಕಾ ಚಿತ್ರಮಂದಿರ ಮುಂದೆ ರಶ್ಮಿಕಾ ವಿರುದ್ಧ ಪ್ರತಿಭನೆ ನಡೆಸಿದರು. ಅಷ್ಟಕ್ಕೂ ಇದಕ್ಕೆ ಕಾರಣ ಏನು ಅಂದರೆ, ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ, ನನಗೆ ಕನ್ನಡ ಮಾತಾಡೋದು ಕಷ್ಟ ಎಂದು ತಮಿಳಿನ ಖಾಸಗಿ ವಾಹಿನಿಯಲ್ಲಿ ಹೇಳಿದ್ದರು.


ಹೀಗಾಗಿ ರಶ್ಮಿಕಾ ಅವರ ಚಿತ್ರ ರಾಜ್ಯದಲ್ಲಿ ಪ್ರದರ್ಶನ ಕಾಣಬಾರದು ಎಂದು ಘೋಷಣೆ ಕೂಗುತ್ತ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಬೆಳೆಯಲು ಕನ್ನಡ ಬೇಕಿತ್ತು. ಆದರೆ ಇದೀಗ ಅವರಿಗೆ ಕನ್ನಡ ಬೇಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಾಣಿಜ್ಯ ಮಂಡಳಿಗೆ ಅವರು ಪತ್ರ ಬರೆದು ರಶ್ಮಿಕಾ ವಿರುದ್ಧ ಕಿಡಿ ಕಾರಿದ್ದಾರೆ.


Find Out More:

Related Articles: