ರವಿ ಬೆಳಗೆರೆ ಬಗ್ಗೆ ದುನಿಯಾ ವಿಜಿ ಹೇಳಿದ್ದೇನು?!

somashekhar
ಪ್ರಿಯ ಸ್ನೇಹಿತರೇ ನಾನು ರವಿ ಬೆಳಗೆರೆ ಅಂತಾನೇ ಪ್ರತಿ ಸಾರಿ ಹೇಳಿಕೊಂಡು ತಮ್ಮನ್ನು ಪರಿಚಯಿಸಿಕೊಳ್ಳುವ ರವಿ ಬೆಳಗರೆ ಅವರು ಇದೀಗ ಬೆಳ್ ಬೆಳಿಗ್ಗೆ ಬೆಳಗೆರೆ ಅನ್ನೋ ಶೀರ್ಷಿಕೆಯಲ್ಲಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಿದ್ದಾರೆ. ಈ ಸರಣಿಯಲ್ಲಿ ಪ್ರತಿ ವಾರವೂ ಹೊಸ ಹೊಸ ವಿಷಯಗಳನ್ನು ಇಟ್ಟುಕೊಂಡು ಮಾತನಾಡುತ್ತಾರೆ. ಈ ಹಿಮದೆ ಸಿದ್ದಾರ್ಥ ವಿಷಯ ಮಾತನಾಡಿದ ಬೆಳೆಗೆರೆ ಇದೀಗ ದರ್ಶನ್ ಮತ್ತು ದುನಿಯಾ ವಿಜಯ್ ಬಗ್ಗೆ ಮಾತನಾಡಿದ್ದಾರೆ. 

ಹೌದು, ಮೊದಲು ದರ್ಶನ್ ಹೆಸರು ಎತ್ತಿಕೊಂಡು ದರ್ಶನ್ ಅವರು ಅವರ ಹೆಂಡತಿ ವಿಜಯಲಕ್ಷ್ಮಿ ಅವರಿಗೆ ಹೊಡೆದಿದ್ದಾನೆ ಎಂದು ಹಿಗ್ಗಾ ಮುಗ್ಗಾ ಟೀಕಿಸಿದ್ದಾರೆ. ಹೊಂಡತಿಗೆ ಹೊಡೆಯೋ ಚಟ ಇವನಿಗೇಕೆ ಎಂದು ದರ್ಶನ್ ಅವರನ್ನು ಜಾಡಿಸಿದ್ದಾರೆ. ಇದಕ್ಕೆ ದರ್ಶನ್ ಅಭಿಮಾನಿಗಳು ರವಿ ಬೆಳಗೆರೆ ಮೇಲೆ ಕೋಪಗೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. 

ಕೇವಲ ದರ್ಶನ್ ಮಾತ್ರವಲ್ಲ, ದುನಿಯಾ ವಿಜಯ್ ಅವರ ಬಗ್ಗೆಯೂ ಮತ್ತೆ ರವಿ ಬೆಳಗೆರೆ ಟೀಕೆ ಮಾಡಿದ್ದಾರೆ. ಒಂದು ಹೆಂಡತಿ ಬಿಟ್ಟು ಮತ್ತೊಂದು ಹೆಂಡತಿ ಕಟ್ಟಿಕೊಂಡಿದ್ದಾನೆ ಗೊಬ್ಬರ ವಿಜಿ. ಕರಿ ವಿಜಿ ಅಂತೆಲ್ಲ ದುನಿಯಾ ವಿಜಯ್ ಅವರಿಗೆ ಮಾತನಾಡಿದ್ದಾರೆ. ಅಲ್ಲದೇ ದುನಿಯಾ ವಿಜಯ್ ಅವರನ್ನು ಹೀಗೆ ಹೀಯಾಳಿಸಿರೋದಕ್ಕೆ ಇದೀಗ ದುನಿಯಾ ವಿಜಯ್ ರೊಚ್ಚಿಗೆದ್ದಿದ್ದಾರೆ.

ಹೌದು.. ಪತ್ರಕರ್ತ ರವಿ ಬೆಳಗರೆ ವಿರುದ್ಧ ನಟ ದುನಿಯಾ ವಿಜಯ್ ಕಿಡಿ ಕಾರಿದ್ದಾರೆ. ಅಲ್ಲದೇ ತುಂಬಾ ಕೀಳಾದ ಬೈಗುಳದ ಅರ್ಚನೆಯನ್ನೂ ಮಾಡಿದ್ದಾರೆ. ಹೌದು ನಟ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಭಾಗವಹಿಸಿದ್ದರು. ಆಗ ರವಿ ಬೆಳಗರೆ ಮಾತನಾಡಿರುವ ವಿಚಾರದ ಬಗ್ಗೆ ಪತ್ರಕರ್ತರು ಪ್ರಸ್ತಾಪ ಮಾಡಿದ್ದರು.


ಇದನ್ನು ಕೇಳಿದ ತಕ್ಷಣವೇ ರವಿ ಬೆಳಗೆರೆ ಸೂ....ಮಗ. ಅವನಿಗೆ ಇಬ್ರು ಹೆಂಡ್ತೀರು. ನಾಲ್ಕು ಮಕ್ಳು. ಅವನಿಗೆ ಪ್ರಜ್ಞೆ ಇಲ್ಲವೇ? ಒಮ್ಮೆ ಪುಲ್ವಾಮಾ ಅಂತಾನೆ . ಒಮ್ಮೆ ಯಾರ್ದೋ ಹೆಂಡತಿ ಅಂತ ಗಲಾಟೆ ಮಾಡ್ತಾನೆ. ಅವನ ವಯಯಸ್ಸಿಗೊಂಡು ಮರ್ಯಾದೆ ಬೇಡವೇ ಎಂದು ದುನಿಯಾ ವಿಜಯ್ ಅವರು ಗರಂ ಆಗಿದ್ದಾರೆ. ಇದೇ ಅವನಿಗೆ ಲಾಸ್ಟ್ ವಾರ್ನಿಂಗ್ ಎಂದು ದುನಿಯಾ ವಿಜಿ ವಾರ್ನಿಂಗ್ ನೀಡಿದ್ದಾರೆ.


Find Out More:

Related Articles: