'ಎಲ್ಲಿಗೆ ಪಯಣ ಯಾವುದೋ ದಾರಿ' ಕಾಶಿನಾಥ್ ಪುತ್ರನ ಹೊಸ ಚಿತ್ರ

somashekhar
ಕಾಶಿನಾಥ್, ಸ್ಯಾಂಡಲ್ ವುಡ್ ನಲ್ಲಿ ಈ ಹೆಸರು ಕೇಳಿದ ಪ್ರತಿಯೊಬ್ಬರ ಮುಖದಲ್ಲಿ ನಗು ತರುವುದು. ತೆರೆ ಹಿಂದೆ ಎಷ್ಟೇ ಕಷ್ಟದ ಜೀವನವಿದ್ದರು ತೆರೆ ಮುಂದೆ ಪ್ರೇಕ್ಷಕರನ್ನು ನಕ್ಕು ನಗಿಸುತ್ತುದ್ದರು. ಹೊಟ್ಟೆ ನೋವಾಗುವ ಹಾಗೆ ನಗಿಸುತ್ತಿದ್ದ ಖ್ಯಾತ ನಿರ್ದೇಶಕ ನಟ. ಇತ್ತೀಚೆಗಷ್ಟೇ ಕಾಶಿನಾಥ್ ನಿಧನರಾಗಿದ್ದಾರೆ ಆದರೆ ಇದೀಗ ಅವರ ಮಗ ಅಭಿಮನ್ಯು ಸಿನಿ ಫೀಲ್ಡ್ ಗೆ ಎಂಟ್ರಿ ಕೊಟ್ಟಿದ್ದು ಹೊಚ್ಚ ಹೊಸ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ.  ಅವರೀಗ ಎಲ್ಲಿಗೆ ಪಯಣ ಯಾವುದೋ ದಾರಿ ಎನ್ನುತ್ತಿದ್ದಾರೆ! ಇದಕ್ಕಿದ್ದಂತೆ ಅವರಿಗೇನಾಯಿತು? ಅವರು ಈ ರೀತಿ ಹೇಳಲು ಕಾರಣವೇನು? ಹೀಗೆ ಅನೇಕ ಪ್ರಶ್ನೆಗಳು ಮೂಡುವುದು ಸಹಜ. ಅದಕ್ಕುತ್ತರ ಇಲ್ಲಿದೆ ಓದಿ.

ಎಲ್ಲಿಗೆ ಪಯಣ ಯಾವುದೋ ದಾರಿ ಎಂದು ಅಭಿಮನ್ಯು ಹೇಳುವುದಕ್ಕೆ ಕಾರಣವೇನೆಂದರೆ, ಅದೇ ಅವರ ಮುಂದಿನ ಸಿನಿಮಾದ ಶೀರ್ಷಿಕೆ. ದೀಪಾವಳಿ ಹಬ್ಬದ ಪ್ರಯುಕ್ತ 'ರಿಯಲ್ ಸ್ಟಾರ್‌' ಉಪೇಂದ್ರ ಅವರು ಈ ಸಿನಿಮಾದ ಟೈಟಲ್‌ ಲಾಂಚ್ ಮಾಡಿದ್ದಾರೆ. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಕಾಶೀನಾಥ್‌ ಅವರೊಂದಿಗೆ ಉಪ್ಪಿ  ಕೆಲಸ ಮಾಡಿಕೊಂಡಿದ್ದರು. ಅನೇಕ ಬಾರಿ, 'ಕಾಶೀನಾಥ್‌ ನನ್ನ ಗುರುಗಳು' ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ. ಈಗ ಅವರ ಪುತ್ರನ ಸಿನಿಮಾದ ಟೈಟಲ್ ಲಾಂಚ್ ಮಾಡಿ, ಹಾರೈಸಿದ್ದಾರೆ. 'ಕಾಶೀನಾಥ್ ಅವರು ದೊಡ್ಡ ನಿರ್ದೇಶಕ/ನಟ. ಅವರ ಸಿನಿಮಾಗಳು ತೆಲುಗು, ತಮಿಳಿಗೆ ಡಬ್‌ ಆಗಿ ತೆರೆಕಾಣುತ್ತಿದ್ದವು. ಹಾಗಾಗಿ, ಅವರ ಮಗ ಅಭಿಮನ್ಯು ಮೇಲೂ ಸಾಕಷ್ಟು ನಿರೀಕ್ಷೆಗಳು ಇರುತ್ತವೆ. ಆದಷ್ಟು ವಿಭಿನ್ನವಾದ ಪ್ರಯತ್ನಗಳನ್ನು ಮಾಡಿ. ಟೈಟಲ್ ಸಾಕಷ್ಟು ವಿಭಿನ್ನವಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ' ಎಂದು ಉಪೇಂದ್ರ ಶುಭ ಕೋರಿದ್ದಾರೆ.

'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಇರಲಿದೆಯಂತೆ.  ಕಿರಣ್ ಸೂರ್ಯ ಈ ಸಿನಿಮಾ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ನಂದೀಶ್‌ ಗೌಡ ಮತ್ತು ಜತೀನ್‌ ಜಿ. ಪಟೇಲ್‌ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಗಣೇಶ್ ನಾರಾಯಣ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಸಿ. ರವಿಚಂದ್ರನ್‌ ಸಂಕಲನ ಮಾಡುತ್ತಿದ್ದಾರೆ.




Find Out More:

Related Articles: